ನನ್ನ ಬಗ್ಗೆ

ನನ್ನ ಬಗ್ಗೆ ಒಂಚೂರು…

ಚಾಮರಾಜ ಸವಡಿ
ಕೊಪ್ಪಳ (ಮೊಕ್ಕಾಂ: ಬೆಂಗಳೂರು), ಕರ್ನಾಟಕ, India
ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಅಳವಂಡಿ ಎಂಬ ಸಣ್ಣ ಊರಲ್ಲಿ ಹುಟ್ಟಿದ ನಾನು ೧೯ ವರ್ಷಗಳವರೆಗೆ ಹುಬ್ಬಳ್ಳಿಗಿಂತ ದೊಡ್ಡ ಊರನ್ನೇ ನೋಡಿದ್ದಿಲ್ಲ.
ಮುಂದೆ ಬದುಕು ಅರ್ಧ ಭಾರತವನ್ನು ಸುತ್ತು ಹಾಕಿಸಿತು. ಹತ್ತಾರು ನೌಕರಿಗಳನ್ನು ಮಾಡಿಸಿತು. ಅತಿ ಭಾವುಕತೆ ಅತ್ಯಂತ ದೊಡ್ಡ ದೌರ್ಬಲ್ಯ ಎಂಬುದು ಅರ್ಥವಾಗುವ ಹೊತ್ತಿಗೆ ನಾನು ೧೦ನೇ ಕೆಲಸ ಬಿಟ್ಟಿದ್ದೆ ಹಾಗೂ ಮದುವೆಯಾಗಿ ಕೇವಲ ಎರಡೇ ತಿಂಗಳಾಗಿದ್ದವು.
ಜೀವನದ ಸ್ಮರಣೀಯ ಕ್ಷಣಗಳನ್ನು ದಾಖಲಿಸುವುದು, ನೈಸರ್ಗಿಕ-ಸಹಜ ಕೃಷಿ, ಸಾಹಿತ್ಯ, ಆರೋಗ್ಯ, ಅಭಿವೃದ್ಧಿ ಪತ್ರಿಕೋದ್ಯಮ, ಮಾನವಿಕ ಸಂಬಂಧಗಳು, ಹಾಗೂ ಎಲ್ಲಕ್ಕಿಂತ ಮುಖ್ಯ, ತಮ್ಮ ವೈಯಕ್ತಿಕ ಪ್ರಗತಿಯನ್ನೂ ಅಲಕ್ಷಿಸಿ ಜನರು ಇನ್ನೊಬ್ಬರ ಕಾಲೆಳೆಯಲು ಏಕೆ ಆಸಕ್ತಿ ತೋರುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ನನ್ನ ಮೂಲಭೂತ ಆಸಕ್ತಿಗಳಲ್ಲಿ ಕೆಲವು!!
ಸದ್ಯ ’ಸುವರ್ಣ ಸುದ್ದಿ ಚಾನಲ್’ನಲ್ಲಿ ಕೆಲಸ ಮಾಡುತ್ತಿದ್ದೇನೆ. ಉಳಿದಂತೆ, ನನ್ನ ಬಗ್ಗೆ ಬ್ಲಾಗ್ನನಲ್ಲಿ ಬಂದ ಬರಹಗಳು ಹೇಳುತ್ತವೆ.

Leave a comment

You must be logged in to post a comment.